ದಿನೇಶ ಉಪ್ಪೂರ:
*ನನ್ನೊಳಗೆ- 87*
ಇತ್ತೀಚೆಗೆ ನನ್ನ ಅಪ್ಪಯ್ಯನ ಶ್ರಾದ್ಧ ಇತ್ತು. ನಮ್ಮ ಆದಿಮನೆ ಚೇರಿಕೆಯಲ್ಲೇ ನಾನೂ ಸುರೇಶಣ್ಣಯ್ಯನೂ ಅದನ್ನು
ಪ್ರತೀ ವರ್ಷದಂತೆ ಶ್ರದ್ಧೆಯಿಂದಲೇ ಮಾಡಿದೆವು. ನಮ್ಮ ಕುಲಪುರೋಹಿತರು ನಿಯೋಜಿಸಿದ ಆರ್ಡಿ ಸತ್ಯನಾರಾಯಣ ಅಡಿಗರು ಬಂದು ಬಹಳ ಚಂದದಲ್ಲಿ ಶ್ರಾದ್ಧವನ್ನು ನಮ್ಮಿಂದ ಮಾಡಿಸಿದರು. ನನಗೆ ತೃಪ್ತಿಯಾಯಿತು.
ಈಗಿನ ಕಾಲದಲ್ಲಿ ಶ್ರಾದ್ಧ ಮಾಡಬೇಕೋ ಬೇಡವೋ? ಮಾಡದಿದ್ದರೆ ಏನು? ಈಗಿನ ಮೋಡರ್ನ್ ಯುಗದಲ್ಲಿ, ಕಮರ್ಶಿಲ್ ಮನೋಭಾವನೆಯ ವರ್ತಮಾನ ಕಾಲದಲ್ಲಿ, ಹಿರಿಯರು ಸಂಬಂಧಿಗಳ ಬಗ್ಗೆ ಯೋಚಿಸಲೂ ಸಮಯ ಇಲ್ಲದ ಈ ವೇಗದ ಕಾಲದಲ್ಲಿ, ಅದರ ಪ್ರಸ್ತುತತೆ ಎಷ್ಟು? ಎನ್ನುವುದು ಬೇರೆ ವಿಷಯ.
ಈ ದಿನ ನನ್ನ ಅಪ್ಪಯ್ಯನ ದಿನ, ಇದು ಅಮ್ಮನ ದಿನ ಎಂದು ನಾನು ಆ ದಿನಗಳನ್ನು ಅವರ ನೆನಪಿಗಾಗಿ ಮೀಸಲಾಗಿಡುತ್ತಿದ್ದೇನೆ. ಈಗೀಗಂತೂ ನಮ್ಮ ಖಾಯಂ ಪುರೋಹಿತರು, ಅವರಿಗೆ ಆ ದಿನ ಎರಡು ಮೂರು ಕಡೆ ಕಾರ್ಯಕ್ರಮಗಳು ಇರುತ್ತಿದ್ದು, ಅವರಿಗೆ ಪುರಸೊತ್ತಿಲ್ಲ ಎಂದೋ, ನಮ್ಮ ಮನೆ ದೂರದ ಹಳ್ಳಿಯಲ್ಲಿ ಇದೆ ಎಂದೋ, ಅವರ ಪರಿಚಯದ ಯಾರು ಯಾರಿಗೋ ಹೇಳಿಸಿ, ನಮ್ಮ ಮನೆಯ ಶ್ರಾದ್ಧದ ಪೌರೋಹಿತ್ಯವನ್ನು ವಹಿಸಿಬಿಡುತ್ತಿದ್ದರು. ಹಾಗಾಗಿ ನಾವು ಪ್ರತೀ ವರ್ಷವೂ ಬೇರೆ ಬೇರೆ ಪುರೋಹಿತರನ್ನು ಕಾಣುವಂತಾಗಿದೆ. ಕೆಲವೊಮ್ಮೆ ಬಂದವರಿಗೆ ಶ್ರಾದ್ಧದ ಬಗ್ಗೆ ಅಷ್ಟು ಗೌರವ ಇಲ್ಲದೇ, ಅವರಿಗೆ ಸರಿಯಾದ ಉಚ್ಛಾರಣೆಯೂ ಬರದೇ, ಹೇಗೆ ಹೇಗೋ ಶ್ರಾದ್ದ ಆದದ್ದೂ ಇದೆ. ಆದರೂ ಆ ದಿನವೊಂದು ಹಿರಿಯರ ನೆನಪಿನಲ್ಲಿ, ಮನೆಯಲ್ಲಿ ಮನೆಯವರ, ಬಂಧುಗಳ ಜೊತೆಯಲ್ಲಿ ಆ ದಿನ ಕಳೆಯಬೇಕು ಎಂಬುದು ನನ್ನ ತೀರ್ಮಾನ.
ಮತ್ತೊಮ್ಮೆ ಅಪ್ಪಯ್ಯ ನೆನಪಾದರು. ಅಪ್ಪಯ್ಯ ಇದ್ದಾಗ, ಅವರ ಮೇಳ ಊರಿನ ಹತ್ತಿರದಲ್ಲಿ ಎಲ್ಲಿಯಾದರೂ ಇದ್ದರೆ, ಮನೆಗೇ ಬಂದೇ ಅವರ ಅಪ್ಪಯ್ಯನ, ಅಮ್ಮನ ಶ್ರಾದ್ಧವನ್ನು ಮಾಡುತ್ತಿದ್ದರು. ಆದರೆ ದೂರದ ಊರಿನಲ್ಲಿದ್ದರೆ, ಮೇಳದ ಆಟಕ್ಕೆ ರಜೆಯನ್ನು ಹಾಕಿ ಬರಬೇಕಾಗಿದ್ದರಿಂದ, ಆಟ ಇರುವ ಊರಿನ ಹತ್ತಿರದಲ್ಲಿ ಎಲ್ಲಾದರೂ ಅನುಕೂಲವಾದ ಸ್ಥಳದಲ್ಲಿ, ಮೊದಲೇ ಅಲ್ಲಿನ ಒಬ್ಬ ಪುರೋಹಿತರಿಗೆ ತಿಳಿಸಿ ಶ್ರಾದ್ಧವನ್ನು ಮಾಡುತ್ತಿದ್ದರು.
ನಮ್ಮ ಮನೆಯಲ್ಲಿ ಮಾಡುವಾಗ ನಮ್ಮ ಕುಲಪುರೋಹಿತರಾದ ಹರಿಕೃಷ್ಣ ಅಡಿಗರು ಶ್ರಾದ್ಧ ಮಾಡಿಸಲು ಬರುತ್ತಿದ್ದರು. ಹರಿಕೃಷ್ಣ ಅಡಿಗರು ಎತ್ತರ ಮೈ ಕಟ್ಟಿನ ಕಪ್ಪಗಿನ ಸುಂದರ ಆಳು. ತಲೆಯಲ್ಲಿ ಜುಟ್ಟು. ಮುಖ ನೋಡಿದರೆ ಗೌರವದಿಂದ ನಮಸ್ಕರಿಸುವ ಎನ್ನಿಸುವ ಪ್ರಸನ್ನತೆ.
ಅವರು ನಮ್ಮ ಮನೆಯ ಪೌರೋಹಿತ್ಯದ ಯಾವ ಕಾರ್ಯಕ್ರಮವನ್ನೂ ತಪ್ಪಿಸಿಕೊಂಡವರಲ್ಲ. ಅಡಿಗರು ಅಂದರೆ ನಮಗೆಲ್ಲರಿಗೂ ತುಂಬಾ ಗೌರವ. ಅವರು ಬೆಳಿಗ್ಗೆ ಹಾಲಾಡಿಯ ದೇವಸ್ಥಾನದಲ್ಲಿ ನಿತ್ಯದ ಪೂಜೆಯನ್ನು ಮುಗಿಸಿಕೊಂಡು, ನಡುಮಧ್ಯಾಹ್ನದ ಹೊತ್ತಿಗೆ ಸೈಕಲ್ ಮೇಲೆ ಒಂದು ಅರ್ಧ ದೂರ ಯಜ್ಞನಾರಾಯಣ ಅಡಿಗರು ಎನ್ನುವವರ ಮನೆಯವರೆಗೆ ಬಂದು, ಅವರ ಹಾಡಿಯ ಬದಿಯಲ್ಲಿ ಮರದ ಕೆಳಗೆ ಸೈಕಲ್ ನ್ನು ನಿಲ್ಲಿಸಿ, ನಂತರ ಗದ್ದೆಗೆ ಇಳಿದು ಬಯಲಿನ ಕಂಟದ ಮೇಲೆ, ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ನಡೆದುಕೊಂಡು ಬಳಲಿ ಬರುತ್ತಿದ್ದರು. ಬರುವಾಗಲೇ ಬಾವಿಕಟ್ಟೆಯಲ್ಲಿ ಕೈಕಾಲುಗಳನ್ನು ತೊಳೆದುಕೊಂಡು, ಚಪ್ಪಲಿಯನ್ನು ಬಾಗಿಲಿನ ಹೊರಗೆ ಬಿಟ್ಟು, ಕಾಲಿನ ಹೊಯಿಗೆಯನ್ನು ಅಲ್ಲಿಯೇ ಇದ್ದ ಗೋಣಿಯ ಹಾಸಿಗೆಗೆ ಚೆನ್ನಾಗಿ ಒರೆಸುವರು, ಹೆಗಲಿನಲ್ಲಿರುವ ಪಾಣಿ ಪಂಚೆಯಲ್ಲಿ ವೇಗವಾಗಿ ತಿರುಗಿಸಿ, "ಹ್ವಾಯ್ " ಎನ್ನುತ್ತಾ ಗಾಳಿ ಬೀಸಿಕೊಳ್ಳುತ್ತಾ ಬಂದು "ಎಂತಾ ಸೆಖೆ ಮರ್ರೆ" ಎಂದು ಚಾವಡಿಯಲ್ಲಿ, ಬಣ್ಣದ ಚಾಪೆಯ ಮೇಲೆ ಆರಾಮವಾಗಿ, ಕೈಗಳನ್ನು ಹಿಂದಕ್ಕೆ ಆಧರಿಸಿ ಕುಳಿತುಕೊಂಡು, ಜಗಲಿಯಲ್ಲಿ ಉದ್ದಕ್ಕೆ ಕಾಲುಗಳನ್ನು ಚಾಚಿಕೊಳ್ಳುತ್ತಿದ್ದರು.
ಅವರು ಕುಳಿತುಕೊಳ್ಳುವ ಮೊದಲೇ, ಚಾವಡಿಯಲ್ಲಿ ಬಣ್ಣದ ಚಾಪೆಯನ್ನು ನಾವು ಯಾರಾದರೂ ಹಾಸಿಡುತ್ತಿದ್ದೆವು. ಮತ್ತು ಅವರ ಎದುರಿಗೆ, ಒಂದು ತಟ್ಟೆಯಲ್ಲಿ ಬೆಲ್ಲ, ಒಂದು ಚೊಂಬಿನಲ್ಲಿ ನೀರು, ಲೋಟ ಇರಿಸುತ್ತಿದ್ದೆವು. ಅವರು ಒಂದು ಬೆಲ್ಲದ ಚೂರನ್ನು ಬಾಯಿಗೆ ಹಾಕಿಕೊಂಡು, ಸ್ಟೀಲಿನ ಲೋಟಕ್ಕೆ ಚೊಂಬಿನಿಂದ ನೀರನ್ನು ಬಗ್ಗಿಸಿಕೊಂಡು ಗಟಗಟನೇ ಕುಡಿದು, " ಶ್ರಾದ್ಧಕ್ಕೆ ಎಲ್ಲಾ ರೆಡಿಯಾಯ್ತಲ್ಲ" ಎಂದು ವಿಚಾರಿಸುತ್ತಿದ್ದರು.
ಅಷ್ಟು ತಡವಾಗಿ ಬಂದರೂ, ಅವರು ಬಂದವರೇ ದರ್ಭೆಯನ್ನು ಬೇಕಾದ ಅಳತೆಗೆ ಪಟಪಟನೇ ಕತ್ತರಿಸಿ ಇಟ್ಟು, ಸ್ನಾನ ಮಾಡಿ ಐದು ನಿಮಿಷದಲ್ಲಿ ದೇವರ ಕೋಣೆಗೆ ಬಂದು ಕುಳಿತು, ಮಂತ್ರ ಹೇಳಲು ರೆಡಿ ಆಗಿಯಾಯಿತು. ನಂತರ ಇಟ್ಟಿದ್ದ ಎಲ್ಲ ಸಲಕರಣೆಗಳ ಮೇಲೆ ಒಮ್ಮೆ ಹೀಗೆ ಕಣ್ಣಾಡಿಸಿ, "ಹೋ ಬಾಳೆ ಹಣ್ಣು ಬೇಕಿತ್ತಲ್ಲ". "ಎಲೆಯಡಿಕೆ ಎಲ್ಲಿ?" ಎಂದು ಬೇಕಾಗಿರುವುದನ್ನು ತರಿಸಿಕೊಂಡು, ಗಟ್ಟಿಯಾಗಿ ಮಂತ್ರೋಚ್ಚಾರಣೆಯನ್ನು ಮಾಡುತ್ತಾ ರಂಗೋಲಿ ಹಾಕಿ ಶುರುಮಾಡುತ್ತಿದ್ದರು. ಅಪ್ಪಯ್ಯನಿಗೆ ಆಗಾಗ "ಹಾಂ. ಸವ್ಯಾ, ಜನಿವಾರ ಬಲಕ್ಕೆ ಮಾಡಿಕೊಳ್ಳಿ, ಅಪಸವ್ಯಾ, ಜನಿವಾರ ಎಡಕ್ಕೆ ಮಾಡಿಕೊಳ್ಳಿ" ಎನ್ನುತ್ತಾ ನಿರ್ದೇಶನವನ್ನು ನೀಡುತ್ತಿದ್ದರು. ಅವರು "ಆಚಮನ ಮಾಡಿ, ಪವಿತ್ರ ಹಾಕಿಕೊಳ್ಳಿ, ಪ್ರಾಣಾಯಾಮ ಮಾಡಿ, ಹತ್ತು ಗಾಯತ್ರಿ, ಪಂಚಾಕ್ಷರಿ, ಅಷ್ಟಾಕ್ಷರಿ ಹೇಳಿ" " ಅಲ್ಲಿಗೆ ಅಕ್ಷತೆ, ಇಲ್ಲಿಗೆ ಎಳ್ಳು, ಇಲ್ಲಿ ಗಂಧ ತುಳಸಿ ಹಾಕಿ" ಎಂದಾಗ ಅಪ್ಪಯ್ಯ ಮಂತ್ರಮುಗ್ಧರಂತೆ ಅವರು ಹೇಳಿದ ಹಾಗೆ ಮಾಡುತ್ತಿದ್ದರು.
ಕೊನೆಯಲ್ಲಿ ಮೂರು ತಲೆಮಾರಿನ ಪಿತೃಗಳಿಗೆ ಅವರ ಗೋತ್ರ, ಹೆಸರು ಹೇಳಿ, ಪಿಂಡ ಹಾಕಿ "ಓಂ ನಮೋ ನಾರಾಯಣಾಯ" ಎಂದು ಅಪ್ಪಯ್ಯ ಹೇಳುವುದು. ನಂತರ ಎಲ್ಲ ಕ್ರಮಗಳೂ ಮುಗಿದು, ಕಾಗೆಗೆ ಬಾಳೆಎಲೆ ಹೊರಗೆ ಇಡುವವರೆಗೂ ನಾವು ಕಾದು ಕುಳಿತಿರುತ್ತಿದ್ದೆವು. ನಂತರ ಅಪ್ಪಯ್ಯ ಪುರೋಹಿತರಿಂದ ಮಂತ್ರಾಕ್ಷತೆ ಪಡೆದು ಹಾಕಿಸಿಕೊಂಡ ನಾವು ಒಬ್ಬೊಬ್ಬರೇ ಹೋಗಿ ಅಪ್ಪಯ್ಯನಿಗೆ ನಮಸ್ಕರಿಸಿ ಮಂತ್ರಾಕ್ಷತೆ ಹಾಕಿಸಿಕೊಳ್ಳುತ್ರಿದ್ದೆವು. ನಂತರ ಚಾವಡಿಯಲ್ಲಿ, ಜಗಲಿಯಲ್ಲಿ ಕಸಗುಡಿಸಿ, ಊಟಕ್ಕೆ ಎಲೆ ಹಾಕುತ್ತಿದ್ದೆವು.
ನಂತರ ಅಪ್ಪಯ್ಯ ಹೊರಗೆ ಬಂದು ನಗುಮುಖದಿಂದ ಬಂದ ಎಲ್ಲ ನೆಂಟರನ್ನು, ಬ್ರಾಹ್ಮಣರನ್ನೂ ನೋಡಿ, "ಬಂದ್ರ್ಯಾ?" "ಬಂದ್ರ್ಯಾ? " "ಬನ್ನಿ ಊಟಕ್ಕೇಳಿ" ಎಂದು ಉಪಚರಿಸಿ ಮಾತಾಡಿಸುತ್ತಿದ್ದರು. ಊಟ ಉಪಚಾರ ಎಲ್ಲ ಆಗಿ ಊಟವಾದ ಮೇಲೆ, ನಂತರ ದಕ್ಷಿಣೆ ಕೊಡುವ ಕಾರ್ಯಕ್ರಮ ಇಟ್ಟುಕೊಳ್ಳುತ್ತಿದ್ದರು. ಆಗ ಬಂದ ಎಲ್ಲರನ್ನೂ ಮತ್ತೊಮ್ಮೆ ಮಾತಾಡಿಸಿ, ಗುರುತು ಇಲ್ಲದಿದ್ದರೆ, "ನಿನ್ನ ಮನೆ ಎಲ್ಲಿ? ಯಾರ ಮಗ?" ಎಂದೆಲ್ಲಾ ಕೇಳಿ ವಿಚಾರಿಸಿಕೊಳ್ಳುತ್ತಿದ್ದರು. ನಂತರ ಮಕ್ಕಳಾದ ನಮಗೆಲ್ಲರಿಗೂ ದಕ್ಷಿಣೆ ಸಿಗುತ್ತಿತ್ತು.
ನಮ್ಮ ಪುರೋಹಿತರು ಹರಿಕೃಷ್ಣ ಅಡಿಗರು ಅಂಗಿಯನ್ನು ಹಾಕಿದ್ದು ನಾನು ನೋಡಲೇ ಇಲ್ಲ. ಒಂದು ವೇಷ್ಟಿಯನ್ನು ಉಟ್ಟು, ಹೆಗಲಮೇಲೆ ಒಂದು ಪಾಣಿ ಪಂಚೆಯನ್ನು ಹಾಕಿಕೊಂಡು ಎಲ್ಲಿಂದ ಎಲ್ಲಿಯವರೆಗೂ ಅವರು ಸೈಕಲ್ಲಿನಲ್ಲೇ ಹೋದಾರು. ಒಂದು ದರ್ಪ ಇಲ್ಲ. ದೌಲತ್ತು ಇಲ್ಲ. ಹೀಗೆಯೇ ಆಗಲೇಬೇಕು ಎಂಬ ಹಠ ಆದೇಶ ಇಲ್ಲ. ಯಾವ ಪರಿಸ್ಥಿತಿಗೂ ಹೊಂದಿಕೊಳ್ಳುವ ಸರಳ ಜೀವಿ. ಎಲ್ಲದಕ್ಕೂ "ಆಯ್ತು" "ಕಾಂಬ" "ಮತ್ತೆಂತ ಮಾಡೂದು" "ಸುಧಾರಿಸುವ" ಎಂಬಂತಹ ಹೊಂದಾಣಿಕೆಯ ಮಾತನ್ನೇ ಆಡುತ್ತಿದ್ದರು
ಅಪ್ಪಯ್ಯ ತೀರಿಹೋದ ನಂತರವೂ ಬಹಳ ವರ್ಷ ನನ್ನ ಅಪ್ಪಯ್ಯನ ಶ್ರಾದ್ಧ ಮಾಡಲಿಕ್ಕೂ ಅವರೇ ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ಮನೆಯವರನ್ನೆಲ್ಲ ಅವರು ಏಕವಚನದಲ್ಲಿಯೇ ಕರೆದು ಮಾತನಾಡಿಸುತ್ತಿದ್ದುದರಿಂದ ಅವರು ಹೊರಗಿನವರು ಅಂತ ನಮಗೆ ಅನ್ನಿಸುತ್ತಲೇ ಇರಲಿಲ್ಲ. ನಮ್ಮ ಮನೆಯ ಎಲ್ಲ ದೇವರ ಕಾರ್ಯವನ್ನು ಅವರನ್ನು ಬಿಟ್ಟು ಮಾಡಿದ್ದೇ ನನಗೆ ನೆನಪಿಲ್ಲ. ಹಾಲಾಡಿಯಲ್ಲಿರುವ ಅವರ ಮನೆಗೂ ನಾನು ಆಗಾಗ ಹೋಗುತ್ತಿದ್ದೆ. ಅವರು ಕುಳಿತುಕೊಳ್ಳುವ ಭಂಗಿ, ಅವರು ಮಂತ್ರ ಹೇಳುತ್ತಿದ್ದ ಆ ಕಂಚಿನ ಕಂಠದ ಸ್ವರ ಈಗಲೂ ನೆನಪಾಗುತ್ತದೆ.
*ನನ್ನೊಳಗೆ- 87*
ಇತ್ತೀಚೆಗೆ ನನ್ನ ಅಪ್ಪಯ್ಯನ ಶ್ರಾದ್ಧ ಇತ್ತು. ನಮ್ಮ ಆದಿಮನೆ ಚೇರಿಕೆಯಲ್ಲೇ ನಾನೂ ಸುರೇಶಣ್ಣಯ್ಯನೂ ಅದನ್ನು
ಪ್ರತೀ ವರ್ಷದಂತೆ ಶ್ರದ್ಧೆಯಿಂದಲೇ ಮಾಡಿದೆವು. ನಮ್ಮ ಕುಲಪುರೋಹಿತರು ನಿಯೋಜಿಸಿದ ಆರ್ಡಿ ಸತ್ಯನಾರಾಯಣ ಅಡಿಗರು ಬಂದು ಬಹಳ ಚಂದದಲ್ಲಿ ಶ್ರಾದ್ಧವನ್ನು ನಮ್ಮಿಂದ ಮಾಡಿಸಿದರು. ನನಗೆ ತೃಪ್ತಿಯಾಯಿತು.
ಈಗಿನ ಕಾಲದಲ್ಲಿ ಶ್ರಾದ್ಧ ಮಾಡಬೇಕೋ ಬೇಡವೋ? ಮಾಡದಿದ್ದರೆ ಏನು? ಈಗಿನ ಮೋಡರ್ನ್ ಯುಗದಲ್ಲಿ, ಕಮರ್ಶಿಲ್ ಮನೋಭಾವನೆಯ ವರ್ತಮಾನ ಕಾಲದಲ್ಲಿ, ಹಿರಿಯರು ಸಂಬಂಧಿಗಳ ಬಗ್ಗೆ ಯೋಚಿಸಲೂ ಸಮಯ ಇಲ್ಲದ ಈ ವೇಗದ ಕಾಲದಲ್ಲಿ, ಅದರ ಪ್ರಸ್ತುತತೆ ಎಷ್ಟು? ಎನ್ನುವುದು ಬೇರೆ ವಿಷಯ.
ಈ ದಿನ ನನ್ನ ಅಪ್ಪಯ್ಯನ ದಿನ, ಇದು ಅಮ್ಮನ ದಿನ ಎಂದು ನಾನು ಆ ದಿನಗಳನ್ನು ಅವರ ನೆನಪಿಗಾಗಿ ಮೀಸಲಾಗಿಡುತ್ತಿದ್ದೇನೆ. ಈಗೀಗಂತೂ ನಮ್ಮ ಖಾಯಂ ಪುರೋಹಿತರು, ಅವರಿಗೆ ಆ ದಿನ ಎರಡು ಮೂರು ಕಡೆ ಕಾರ್ಯಕ್ರಮಗಳು ಇರುತ್ತಿದ್ದು, ಅವರಿಗೆ ಪುರಸೊತ್ತಿಲ್ಲ ಎಂದೋ, ನಮ್ಮ ಮನೆ ದೂರದ ಹಳ್ಳಿಯಲ್ಲಿ ಇದೆ ಎಂದೋ, ಅವರ ಪರಿಚಯದ ಯಾರು ಯಾರಿಗೋ ಹೇಳಿಸಿ, ನಮ್ಮ ಮನೆಯ ಶ್ರಾದ್ಧದ ಪೌರೋಹಿತ್ಯವನ್ನು ವಹಿಸಿಬಿಡುತ್ತಿದ್ದರು. ಹಾಗಾಗಿ ನಾವು ಪ್ರತೀ ವರ್ಷವೂ ಬೇರೆ ಬೇರೆ ಪುರೋಹಿತರನ್ನು ಕಾಣುವಂತಾಗಿದೆ. ಕೆಲವೊಮ್ಮೆ ಬಂದವರಿಗೆ ಶ್ರಾದ್ಧದ ಬಗ್ಗೆ ಅಷ್ಟು ಗೌರವ ಇಲ್ಲದೇ, ಅವರಿಗೆ ಸರಿಯಾದ ಉಚ್ಛಾರಣೆಯೂ ಬರದೇ, ಹೇಗೆ ಹೇಗೋ ಶ್ರಾದ್ದ ಆದದ್ದೂ ಇದೆ. ಆದರೂ ಆ ದಿನವೊಂದು ಹಿರಿಯರ ನೆನಪಿನಲ್ಲಿ, ಮನೆಯಲ್ಲಿ ಮನೆಯವರ, ಬಂಧುಗಳ ಜೊತೆಯಲ್ಲಿ ಆ ದಿನ ಕಳೆಯಬೇಕು ಎಂಬುದು ನನ್ನ ತೀರ್ಮಾನ.
ಮತ್ತೊಮ್ಮೆ ಅಪ್ಪಯ್ಯ ನೆನಪಾದರು. ಅಪ್ಪಯ್ಯ ಇದ್ದಾಗ, ಅವರ ಮೇಳ ಊರಿನ ಹತ್ತಿರದಲ್ಲಿ ಎಲ್ಲಿಯಾದರೂ ಇದ್ದರೆ, ಮನೆಗೇ ಬಂದೇ ಅವರ ಅಪ್ಪಯ್ಯನ, ಅಮ್ಮನ ಶ್ರಾದ್ಧವನ್ನು ಮಾಡುತ್ತಿದ್ದರು. ಆದರೆ ದೂರದ ಊರಿನಲ್ಲಿದ್ದರೆ, ಮೇಳದ ಆಟಕ್ಕೆ ರಜೆಯನ್ನು ಹಾಕಿ ಬರಬೇಕಾಗಿದ್ದರಿಂದ, ಆಟ ಇರುವ ಊರಿನ ಹತ್ತಿರದಲ್ಲಿ ಎಲ್ಲಾದರೂ ಅನುಕೂಲವಾದ ಸ್ಥಳದಲ್ಲಿ, ಮೊದಲೇ ಅಲ್ಲಿನ ಒಬ್ಬ ಪುರೋಹಿತರಿಗೆ ತಿಳಿಸಿ ಶ್ರಾದ್ಧವನ್ನು ಮಾಡುತ್ತಿದ್ದರು.
ನಮ್ಮ ಮನೆಯಲ್ಲಿ ಮಾಡುವಾಗ ನಮ್ಮ ಕುಲಪುರೋಹಿತರಾದ ಹರಿಕೃಷ್ಣ ಅಡಿಗರು ಶ್ರಾದ್ಧ ಮಾಡಿಸಲು ಬರುತ್ತಿದ್ದರು. ಹರಿಕೃಷ್ಣ ಅಡಿಗರು ಎತ್ತರ ಮೈ ಕಟ್ಟಿನ ಕಪ್ಪಗಿನ ಸುಂದರ ಆಳು. ತಲೆಯಲ್ಲಿ ಜುಟ್ಟು. ಮುಖ ನೋಡಿದರೆ ಗೌರವದಿಂದ ನಮಸ್ಕರಿಸುವ ಎನ್ನಿಸುವ ಪ್ರಸನ್ನತೆ.
ಅವರು ನಮ್ಮ ಮನೆಯ ಪೌರೋಹಿತ್ಯದ ಯಾವ ಕಾರ್ಯಕ್ರಮವನ್ನೂ ತಪ್ಪಿಸಿಕೊಂಡವರಲ್ಲ. ಅಡಿಗರು ಅಂದರೆ ನಮಗೆಲ್ಲರಿಗೂ ತುಂಬಾ ಗೌರವ. ಅವರು ಬೆಳಿಗ್ಗೆ ಹಾಲಾಡಿಯ ದೇವಸ್ಥಾನದಲ್ಲಿ ನಿತ್ಯದ ಪೂಜೆಯನ್ನು ಮುಗಿಸಿಕೊಂಡು, ನಡುಮಧ್ಯಾಹ್ನದ ಹೊತ್ತಿಗೆ ಸೈಕಲ್ ಮೇಲೆ ಒಂದು ಅರ್ಧ ದೂರ ಯಜ್ಞನಾರಾಯಣ ಅಡಿಗರು ಎನ್ನುವವರ ಮನೆಯವರೆಗೆ ಬಂದು, ಅವರ ಹಾಡಿಯ ಬದಿಯಲ್ಲಿ ಮರದ ಕೆಳಗೆ ಸೈಕಲ್ ನ್ನು ನಿಲ್ಲಿಸಿ, ನಂತರ ಗದ್ದೆಗೆ ಇಳಿದು ಬಯಲಿನ ಕಂಟದ ಮೇಲೆ, ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ನಡೆದುಕೊಂಡು ಬಳಲಿ ಬರುತ್ತಿದ್ದರು. ಬರುವಾಗಲೇ ಬಾವಿಕಟ್ಟೆಯಲ್ಲಿ ಕೈಕಾಲುಗಳನ್ನು ತೊಳೆದುಕೊಂಡು, ಚಪ್ಪಲಿಯನ್ನು ಬಾಗಿಲಿನ ಹೊರಗೆ ಬಿಟ್ಟು, ಕಾಲಿನ ಹೊಯಿಗೆಯನ್ನು ಅಲ್ಲಿಯೇ ಇದ್ದ ಗೋಣಿಯ ಹಾಸಿಗೆಗೆ ಚೆನ್ನಾಗಿ ಒರೆಸುವರು, ಹೆಗಲಿನಲ್ಲಿರುವ ಪಾಣಿ ಪಂಚೆಯಲ್ಲಿ ವೇಗವಾಗಿ ತಿರುಗಿಸಿ, "ಹ್ವಾಯ್ " ಎನ್ನುತ್ತಾ ಗಾಳಿ ಬೀಸಿಕೊಳ್ಳುತ್ತಾ ಬಂದು "ಎಂತಾ ಸೆಖೆ ಮರ್ರೆ" ಎಂದು ಚಾವಡಿಯಲ್ಲಿ, ಬಣ್ಣದ ಚಾಪೆಯ ಮೇಲೆ ಆರಾಮವಾಗಿ, ಕೈಗಳನ್ನು ಹಿಂದಕ್ಕೆ ಆಧರಿಸಿ ಕುಳಿತುಕೊಂಡು, ಜಗಲಿಯಲ್ಲಿ ಉದ್ದಕ್ಕೆ ಕಾಲುಗಳನ್ನು ಚಾಚಿಕೊಳ್ಳುತ್ತಿದ್ದರು.
ಅವರು ಕುಳಿತುಕೊಳ್ಳುವ ಮೊದಲೇ, ಚಾವಡಿಯಲ್ಲಿ ಬಣ್ಣದ ಚಾಪೆಯನ್ನು ನಾವು ಯಾರಾದರೂ ಹಾಸಿಡುತ್ತಿದ್ದೆವು. ಮತ್ತು ಅವರ ಎದುರಿಗೆ, ಒಂದು ತಟ್ಟೆಯಲ್ಲಿ ಬೆಲ್ಲ, ಒಂದು ಚೊಂಬಿನಲ್ಲಿ ನೀರು, ಲೋಟ ಇರಿಸುತ್ತಿದ್ದೆವು. ಅವರು ಒಂದು ಬೆಲ್ಲದ ಚೂರನ್ನು ಬಾಯಿಗೆ ಹಾಕಿಕೊಂಡು, ಸ್ಟೀಲಿನ ಲೋಟಕ್ಕೆ ಚೊಂಬಿನಿಂದ ನೀರನ್ನು ಬಗ್ಗಿಸಿಕೊಂಡು ಗಟಗಟನೇ ಕುಡಿದು, " ಶ್ರಾದ್ಧಕ್ಕೆ ಎಲ್ಲಾ ರೆಡಿಯಾಯ್ತಲ್ಲ" ಎಂದು ವಿಚಾರಿಸುತ್ತಿದ್ದರು.
ಅಷ್ಟು ತಡವಾಗಿ ಬಂದರೂ, ಅವರು ಬಂದವರೇ ದರ್ಭೆಯನ್ನು ಬೇಕಾದ ಅಳತೆಗೆ ಪಟಪಟನೇ ಕತ್ತರಿಸಿ ಇಟ್ಟು, ಸ್ನಾನ ಮಾಡಿ ಐದು ನಿಮಿಷದಲ್ಲಿ ದೇವರ ಕೋಣೆಗೆ ಬಂದು ಕುಳಿತು, ಮಂತ್ರ ಹೇಳಲು ರೆಡಿ ಆಗಿಯಾಯಿತು. ನಂತರ ಇಟ್ಟಿದ್ದ ಎಲ್ಲ ಸಲಕರಣೆಗಳ ಮೇಲೆ ಒಮ್ಮೆ ಹೀಗೆ ಕಣ್ಣಾಡಿಸಿ, "ಹೋ ಬಾಳೆ ಹಣ್ಣು ಬೇಕಿತ್ತಲ್ಲ". "ಎಲೆಯಡಿಕೆ ಎಲ್ಲಿ?" ಎಂದು ಬೇಕಾಗಿರುವುದನ್ನು ತರಿಸಿಕೊಂಡು, ಗಟ್ಟಿಯಾಗಿ ಮಂತ್ರೋಚ್ಚಾರಣೆಯನ್ನು ಮಾಡುತ್ತಾ ರಂಗೋಲಿ ಹಾಕಿ ಶುರುಮಾಡುತ್ತಿದ್ದರು. ಅಪ್ಪಯ್ಯನಿಗೆ ಆಗಾಗ "ಹಾಂ. ಸವ್ಯಾ, ಜನಿವಾರ ಬಲಕ್ಕೆ ಮಾಡಿಕೊಳ್ಳಿ, ಅಪಸವ್ಯಾ, ಜನಿವಾರ ಎಡಕ್ಕೆ ಮಾಡಿಕೊಳ್ಳಿ" ಎನ್ನುತ್ತಾ ನಿರ್ದೇಶನವನ್ನು ನೀಡುತ್ತಿದ್ದರು. ಅವರು "ಆಚಮನ ಮಾಡಿ, ಪವಿತ್ರ ಹಾಕಿಕೊಳ್ಳಿ, ಪ್ರಾಣಾಯಾಮ ಮಾಡಿ, ಹತ್ತು ಗಾಯತ್ರಿ, ಪಂಚಾಕ್ಷರಿ, ಅಷ್ಟಾಕ್ಷರಿ ಹೇಳಿ" " ಅಲ್ಲಿಗೆ ಅಕ್ಷತೆ, ಇಲ್ಲಿಗೆ ಎಳ್ಳು, ಇಲ್ಲಿ ಗಂಧ ತುಳಸಿ ಹಾಕಿ" ಎಂದಾಗ ಅಪ್ಪಯ್ಯ ಮಂತ್ರಮುಗ್ಧರಂತೆ ಅವರು ಹೇಳಿದ ಹಾಗೆ ಮಾಡುತ್ತಿದ್ದರು.
ಕೊನೆಯಲ್ಲಿ ಮೂರು ತಲೆಮಾರಿನ ಪಿತೃಗಳಿಗೆ ಅವರ ಗೋತ್ರ, ಹೆಸರು ಹೇಳಿ, ಪಿಂಡ ಹಾಕಿ "ಓಂ ನಮೋ ನಾರಾಯಣಾಯ" ಎಂದು ಅಪ್ಪಯ್ಯ ಹೇಳುವುದು. ನಂತರ ಎಲ್ಲ ಕ್ರಮಗಳೂ ಮುಗಿದು, ಕಾಗೆಗೆ ಬಾಳೆಎಲೆ ಹೊರಗೆ ಇಡುವವರೆಗೂ ನಾವು ಕಾದು ಕುಳಿತಿರುತ್ತಿದ್ದೆವು. ನಂತರ ಅಪ್ಪಯ್ಯ ಪುರೋಹಿತರಿಂದ ಮಂತ್ರಾಕ್ಷತೆ ಪಡೆದು ಹಾಕಿಸಿಕೊಂಡ ನಾವು ಒಬ್ಬೊಬ್ಬರೇ ಹೋಗಿ ಅಪ್ಪಯ್ಯನಿಗೆ ನಮಸ್ಕರಿಸಿ ಮಂತ್ರಾಕ್ಷತೆ ಹಾಕಿಸಿಕೊಳ್ಳುತ್ರಿದ್ದೆವು. ನಂತರ ಚಾವಡಿಯಲ್ಲಿ, ಜಗಲಿಯಲ್ಲಿ ಕಸಗುಡಿಸಿ, ಊಟಕ್ಕೆ ಎಲೆ ಹಾಕುತ್ತಿದ್ದೆವು.
ನಂತರ ಅಪ್ಪಯ್ಯ ಹೊರಗೆ ಬಂದು ನಗುಮುಖದಿಂದ ಬಂದ ಎಲ್ಲ ನೆಂಟರನ್ನು, ಬ್ರಾಹ್ಮಣರನ್ನೂ ನೋಡಿ, "ಬಂದ್ರ್ಯಾ?" "ಬಂದ್ರ್ಯಾ? " "ಬನ್ನಿ ಊಟಕ್ಕೇಳಿ" ಎಂದು ಉಪಚರಿಸಿ ಮಾತಾಡಿಸುತ್ತಿದ್ದರು. ಊಟ ಉಪಚಾರ ಎಲ್ಲ ಆಗಿ ಊಟವಾದ ಮೇಲೆ, ನಂತರ ದಕ್ಷಿಣೆ ಕೊಡುವ ಕಾರ್ಯಕ್ರಮ ಇಟ್ಟುಕೊಳ್ಳುತ್ತಿದ್ದರು. ಆಗ ಬಂದ ಎಲ್ಲರನ್ನೂ ಮತ್ತೊಮ್ಮೆ ಮಾತಾಡಿಸಿ, ಗುರುತು ಇಲ್ಲದಿದ್ದರೆ, "ನಿನ್ನ ಮನೆ ಎಲ್ಲಿ? ಯಾರ ಮಗ?" ಎಂದೆಲ್ಲಾ ಕೇಳಿ ವಿಚಾರಿಸಿಕೊಳ್ಳುತ್ತಿದ್ದರು. ನಂತರ ಮಕ್ಕಳಾದ ನಮಗೆಲ್ಲರಿಗೂ ದಕ್ಷಿಣೆ ಸಿಗುತ್ತಿತ್ತು.
ನಮ್ಮ ಪುರೋಹಿತರು ಹರಿಕೃಷ್ಣ ಅಡಿಗರು ಅಂಗಿಯನ್ನು ಹಾಕಿದ್ದು ನಾನು ನೋಡಲೇ ಇಲ್ಲ. ಒಂದು ವೇಷ್ಟಿಯನ್ನು ಉಟ್ಟು, ಹೆಗಲಮೇಲೆ ಒಂದು ಪಾಣಿ ಪಂಚೆಯನ್ನು ಹಾಕಿಕೊಂಡು ಎಲ್ಲಿಂದ ಎಲ್ಲಿಯವರೆಗೂ ಅವರು ಸೈಕಲ್ಲಿನಲ್ಲೇ ಹೋದಾರು. ಒಂದು ದರ್ಪ ಇಲ್ಲ. ದೌಲತ್ತು ಇಲ್ಲ. ಹೀಗೆಯೇ ಆಗಲೇಬೇಕು ಎಂಬ ಹಠ ಆದೇಶ ಇಲ್ಲ. ಯಾವ ಪರಿಸ್ಥಿತಿಗೂ ಹೊಂದಿಕೊಳ್ಳುವ ಸರಳ ಜೀವಿ. ಎಲ್ಲದಕ್ಕೂ "ಆಯ್ತು" "ಕಾಂಬ" "ಮತ್ತೆಂತ ಮಾಡೂದು" "ಸುಧಾರಿಸುವ" ಎಂಬಂತಹ ಹೊಂದಾಣಿಕೆಯ ಮಾತನ್ನೇ ಆಡುತ್ತಿದ್ದರು
ಅಪ್ಪಯ್ಯ ತೀರಿಹೋದ ನಂತರವೂ ಬಹಳ ವರ್ಷ ನನ್ನ ಅಪ್ಪಯ್ಯನ ಶ್ರಾದ್ಧ ಮಾಡಲಿಕ್ಕೂ ಅವರೇ ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ಮನೆಯವರನ್ನೆಲ್ಲ ಅವರು ಏಕವಚನದಲ್ಲಿಯೇ ಕರೆದು ಮಾತನಾಡಿಸುತ್ತಿದ್ದುದರಿಂದ ಅವರು ಹೊರಗಿನವರು ಅಂತ ನಮಗೆ ಅನ್ನಿಸುತ್ತಲೇ ಇರಲಿಲ್ಲ. ನಮ್ಮ ಮನೆಯ ಎಲ್ಲ ದೇವರ ಕಾರ್ಯವನ್ನು ಅವರನ್ನು ಬಿಟ್ಟು ಮಾಡಿದ್ದೇ ನನಗೆ ನೆನಪಿಲ್ಲ. ಹಾಲಾಡಿಯಲ್ಲಿರುವ ಅವರ ಮನೆಗೂ ನಾನು ಆಗಾಗ ಹೋಗುತ್ತಿದ್ದೆ. ಅವರು ಕುಳಿತುಕೊಳ್ಳುವ ಭಂಗಿ, ಅವರು ಮಂತ್ರ ಹೇಳುತ್ತಿದ್ದ ಆ ಕಂಚಿನ ಕಂಠದ ಸ್ವರ ಈಗಲೂ ನೆನಪಾಗುತ್ತದೆ.