ದಿನೇಶ ಉಪ್ಪೂರ:
# *ರಾಜಸ್ಥಾನ ಯಾನ*
ಭಾಗ ೧೮
ತಾನೋಟ್ ಮಾತಾ ಮಂದಿರವು, ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ರಾಜಸ್ಥಾನದ ಜೈಸಲ್ಮೇರ್ ಬಳಿ ಇದೆ. ಅಲ್ಲಿ ತಾನೋಟ್ ರಾಯ್ ಮಾತೆಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ದೇವಿಯು ಬಲೂಚಿಸ್ತಾನದ ಮಾತಾ ಹಿಂಗ್ಲಾಜ್ನ ರೂಪ ಎಂದು ನಂಬಲಾಗಿದೆ. ತಾನೋಟ್ ಮಾತಾ ಭಾರತೀಯ ಗಡಿ ಭದ್ರತಾ ಪಡೆಯ ಆರಾಧ್ಯ ದೇವತೆಯಾಗಿದ್ದಾಳೆ.
ಸೇನಾ ಸಿಬ್ಬಂದಿಗಳೇ ಸಮವಸ್ತ್ರದಲ್ಲಿದ್ದು ಈ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ತಾನೋಟ್ ಮಾತಾ ದೇವಸ್ಥಾನಕ್ಕೆ ಸಂಬಂಧಿಸಿದ ವಿಶೇಷ ವಿಷಯಗಳನ್ನು ತಿಳಿಸುವುದಾದರೆ …
ಜೈಸಲ್ಮೇರ್ ಮತ್ತು ಅದರ ಸುತ್ತಮುತ್ತಲಿನ ಜನರಿಗೆ ಈ ದೇವತೆಯ ಮೇಲೆ ಆಳವಾದ ನಂಬಿಕೆ ಇದೆ. ತಾನೋಟ್ ರಾಯ್ ಮಾತಾ ದೇವಸ್ಥಾನದಲ್ಲಿ ನವರಾತ್ರಿ ಸಮಯದಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಈ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ನಂಬಿಕೆಯ ಪ್ರಕಾರ, ಇಲ್ಲಿಗೆ ಬರುವ ಎಲ್ಲ ಭಕ್ತರ ಬೇಡಿಕೆಯನ್ನು ತಾಯಿ ಈಡೇರಿಸುತ್ತಿದ್ದಳು. ಭಕ್ತರು ಕೋರಿಕೆಯನ್ನು ಕೇಳಿಕೊಂಡು, ಕೆಲವು ರೂಪಾಯಿಗಳನ್ನು ಕರವಸ್ತ್ರದಲ್ಲಿ ಕಟ್ಟಿ ಇಲ್ಲಿ ಇಟ್ಟುಹೋಗುತ್ತಾರೆ. ಇದರ ನಂತರ,ಅವರ ಕೇಳಿಕೆಯು ಪೂರ್ಣಗೊಂಡಾಗ, ಭಕ್ತರು ದೇವಿಯನ್ನು ನೋಡಲು ಬಂದು ಕರವಸ್ತ್ರದಲ್ಲಿ ಇಟ್ಟಿರುವ ಹಣವನ್ನು ದೇವಿಗೆ ಅರ್ಪಿಸುತ್ತಾರೆ.
ಇಲ್ಲಿ ಕ್ರಿ.ಶ.1965ರಲ್ಲಿ ಒಂದು ಪವಾಡವು ಸಂಭವಿಸಿತ್ತು.
ಭಾರತ ಮತ್ತು ಪಾಕಿಸ್ತಾನಗಳು 1965 ರಲ್ಲಿ ಹೋರಾಡಿದವು. ಯುದ್ಧದಲ್ಲಿ, ಮಾತಾ ಮಂದಿರ ಪ್ರದೇಶದಲ್ಲಿ ಸುಮಾರು 3000 ಬಾಂಬ್ಗಳನ್ನು ಪಾಕಿಸ್ತಾನ ಸೇನೆಯು ಬೀಳಿಸಿತು, ಆದರೆ ಈ ದೇವಾಲಯಕ್ಕೆ ಯಾವುದೇ ಹಾನಿಯಾಗಲಿಲ್ಲ. ದೇವಾಲಯದ ಕಟ್ಟಡವು ಸಹ ಹಾಗೇ ಇತ್ತು.
ಇಂದು ಸುಮಾರು 450 ಪಾಕಿಸ್ತಾನಿ ಬಾಂಬುಗಳನ್ನು ತಾನೋಟ್ ಮಾತಾ ದೇವಾಲಯ ಸಂಕೀರ್ಣದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಾಗಿದೆ. ಭಾರತೀಯ ಸೇನೆ ಮತ್ತು ಇಲ್ಲಿನ ಜನರು ಇದನ್ನು ದೇವತೆಯ ಪವಾಡವೆಂದು ಪರಿಗಣಿಸುತ್ತಾರೆ.
ಆದ್ದರಿಂದ ಭಾರತೀಯ ಗಡಿ ಭದ್ರತಾ ಪಡೆಯು ಈ ದೇವಿಯ ದೇವಾಲಯವನ್ನು ಇಂದೂ ನೋಡಿಕೊಳ್ಳುತ್ತಿದೆ. ಭಾರತ-ಪಾಕಿಸ್ತಾನ ಯುದ್ಧದ ನೆನಪಿಗಾಗಿ ಇಲ್ಲಿ ವಿಜಯ ಸ್ತಂಭವನ್ನು ಸಹ ನಿರ್ಮಿಸಲಾಗಿದೆ. ಈ ಸ್ತಂಭವು ಭಾರತೀಯ ಸೈನಿಕರ ಶೌರ್ಯವನ್ನು ನೆನಪಿಸುತ್ತದೆ.
ಆ ದೇವಾಲಯವನ್ನು ನೋಡಿದ ನಾವು ಮುಂದೆ ಲಾಂಗೆವಾಲ ಪ್ರದೇಶದಲ್ಲಿ ಇರುವ ಒಂದು ಅಪೂರ್ವವಾದ ಮ್ಯೂಸಿಯಮ್ ನ್ನು ನೋಡಲು ಹೊರಟೆವು. ಅದು ಭಾರತ ಪಾಕಿಸ್ಥಾನ ಯುದ್ಧ ನಡೆದಾಗ, ಪಾಕಿಸ್ಥಾನದ ಯುದ್ಧ ಟ್ಯಾಂಕರ್ ನ್ನು ಕೆಲವೇ ಸೈನಿಕರು ವೀರತನದಿಂದ ಕಾದಾಡಿ ಉರುಳಿಸಿದ ಭಾರತದ ಹೆಮ್ಮೆಯ ತಾಣ.
ಕ್ರಿ. ಶ. 1971 ರ ಡಿಸೆಂಬರ್ 4 ರಂದು, ಸಂಜೆ ಪಾಕಿಸ್ತಾನವು ಭಾರತದ ಮೇಲೆ ಆಕ್ರಮಣ ಮಾಡಿದ್ದರಿಂದ, ಪಾಕಿಸ್ತಾನ ಗಡಿಯ ಸಮೀಪವಿರುವ ಲೋಂಗೇವಾಲಾ ಎಂಬ ಪ್ರದೇಶದಲ್ಲಿ ಹೋರಾಡಬೇಕಾಯಿತು.
ಭಾರತದ 23 ಪಂಜಾಬ್ ರೆಜಿಮೆಂಟ್ನ 120 ಸೈನಿಕರು ಇರುವ ವಾಯುಪಡೆಯು ಕೆಚ್ಚೆದೆಯಿಂದ ಹೋರಾಡಿ, ಪಾಕಿಸ್ತಾನದ ಇಡೀ ಟ್ಯಾಂಕ್ ರೆಜಿಮೆಂಟ್ ಮತ್ತು ಸಾವಿರಾರು ಕಾಲಾಳು ಪಡೆಗಳನ್ನು ಹಿಮ್ಮೆಟ್ಟಿಸಿದೆ.
………..ಮುಂದುವರಿಯುವುದು.
ಫೋಟೋ ಗಳಿಗಾಗಿ ಕೆಳಗಿನ ಲಿಂಕ್ ನೋಡಿ,
https://drive.google.com/folderview?id=14qu8z5142s4UX5dqtu4RWT6GaBwWeQHP
# *ರಾಜಸ್ಥಾನ ಯಾನ*
ಭಾಗ ೧೮
ತಾನೋಟ್ ಮಾತಾ ಮಂದಿರವು, ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ರಾಜಸ್ಥಾನದ ಜೈಸಲ್ಮೇರ್ ಬಳಿ ಇದೆ. ಅಲ್ಲಿ ತಾನೋಟ್ ರಾಯ್ ಮಾತೆಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ದೇವಿಯು ಬಲೂಚಿಸ್ತಾನದ ಮಾತಾ ಹಿಂಗ್ಲಾಜ್ನ ರೂಪ ಎಂದು ನಂಬಲಾಗಿದೆ. ತಾನೋಟ್ ಮಾತಾ ಭಾರತೀಯ ಗಡಿ ಭದ್ರತಾ ಪಡೆಯ ಆರಾಧ್ಯ ದೇವತೆಯಾಗಿದ್ದಾಳೆ.
ಸೇನಾ ಸಿಬ್ಬಂದಿಗಳೇ ಸಮವಸ್ತ್ರದಲ್ಲಿದ್ದು ಈ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ತಾನೋಟ್ ಮಾತಾ ದೇವಸ್ಥಾನಕ್ಕೆ ಸಂಬಂಧಿಸಿದ ವಿಶೇಷ ವಿಷಯಗಳನ್ನು ತಿಳಿಸುವುದಾದರೆ …
ಜೈಸಲ್ಮೇರ್ ಮತ್ತು ಅದರ ಸುತ್ತಮುತ್ತಲಿನ ಜನರಿಗೆ ಈ ದೇವತೆಯ ಮೇಲೆ ಆಳವಾದ ನಂಬಿಕೆ ಇದೆ. ತಾನೋಟ್ ರಾಯ್ ಮಾತಾ ದೇವಸ್ಥಾನದಲ್ಲಿ ನವರಾತ್ರಿ ಸಮಯದಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಈ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ನಂಬಿಕೆಯ ಪ್ರಕಾರ, ಇಲ್ಲಿಗೆ ಬರುವ ಎಲ್ಲ ಭಕ್ತರ ಬೇಡಿಕೆಯನ್ನು ತಾಯಿ ಈಡೇರಿಸುತ್ತಿದ್ದಳು. ಭಕ್ತರು ಕೋರಿಕೆಯನ್ನು ಕೇಳಿಕೊಂಡು, ಕೆಲವು ರೂಪಾಯಿಗಳನ್ನು ಕರವಸ್ತ್ರದಲ್ಲಿ ಕಟ್ಟಿ ಇಲ್ಲಿ ಇಟ್ಟುಹೋಗುತ್ತಾರೆ. ಇದರ ನಂತರ,ಅವರ ಕೇಳಿಕೆಯು ಪೂರ್ಣಗೊಂಡಾಗ, ಭಕ್ತರು ದೇವಿಯನ್ನು ನೋಡಲು ಬಂದು ಕರವಸ್ತ್ರದಲ್ಲಿ ಇಟ್ಟಿರುವ ಹಣವನ್ನು ದೇವಿಗೆ ಅರ್ಪಿಸುತ್ತಾರೆ.
ಇಲ್ಲಿ ಕ್ರಿ.ಶ.1965ರಲ್ಲಿ ಒಂದು ಪವಾಡವು ಸಂಭವಿಸಿತ್ತು.
ಭಾರತ ಮತ್ತು ಪಾಕಿಸ್ತಾನಗಳು 1965 ರಲ್ಲಿ ಹೋರಾಡಿದವು. ಯುದ್ಧದಲ್ಲಿ, ಮಾತಾ ಮಂದಿರ ಪ್ರದೇಶದಲ್ಲಿ ಸುಮಾರು 3000 ಬಾಂಬ್ಗಳನ್ನು ಪಾಕಿಸ್ತಾನ ಸೇನೆಯು ಬೀಳಿಸಿತು, ಆದರೆ ಈ ದೇವಾಲಯಕ್ಕೆ ಯಾವುದೇ ಹಾನಿಯಾಗಲಿಲ್ಲ. ದೇವಾಲಯದ ಕಟ್ಟಡವು ಸಹ ಹಾಗೇ ಇತ್ತು.
ಇಂದು ಸುಮಾರು 450 ಪಾಕಿಸ್ತಾನಿ ಬಾಂಬುಗಳನ್ನು ತಾನೋಟ್ ಮಾತಾ ದೇವಾಲಯ ಸಂಕೀರ್ಣದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಾಗಿದೆ. ಭಾರತೀಯ ಸೇನೆ ಮತ್ತು ಇಲ್ಲಿನ ಜನರು ಇದನ್ನು ದೇವತೆಯ ಪವಾಡವೆಂದು ಪರಿಗಣಿಸುತ್ತಾರೆ.
ಆದ್ದರಿಂದ ಭಾರತೀಯ ಗಡಿ ಭದ್ರತಾ ಪಡೆಯು ಈ ದೇವಿಯ ದೇವಾಲಯವನ್ನು ಇಂದೂ ನೋಡಿಕೊಳ್ಳುತ್ತಿದೆ. ಭಾರತ-ಪಾಕಿಸ್ತಾನ ಯುದ್ಧದ ನೆನಪಿಗಾಗಿ ಇಲ್ಲಿ ವಿಜಯ ಸ್ತಂಭವನ್ನು ಸಹ ನಿರ್ಮಿಸಲಾಗಿದೆ. ಈ ಸ್ತಂಭವು ಭಾರತೀಯ ಸೈನಿಕರ ಶೌರ್ಯವನ್ನು ನೆನಪಿಸುತ್ತದೆ.
ಆ ದೇವಾಲಯವನ್ನು ನೋಡಿದ ನಾವು ಮುಂದೆ ಲಾಂಗೆವಾಲ ಪ್ರದೇಶದಲ್ಲಿ ಇರುವ ಒಂದು ಅಪೂರ್ವವಾದ ಮ್ಯೂಸಿಯಮ್ ನ್ನು ನೋಡಲು ಹೊರಟೆವು. ಅದು ಭಾರತ ಪಾಕಿಸ್ಥಾನ ಯುದ್ಧ ನಡೆದಾಗ, ಪಾಕಿಸ್ಥಾನದ ಯುದ್ಧ ಟ್ಯಾಂಕರ್ ನ್ನು ಕೆಲವೇ ಸೈನಿಕರು ವೀರತನದಿಂದ ಕಾದಾಡಿ ಉರುಳಿಸಿದ ಭಾರತದ ಹೆಮ್ಮೆಯ ತಾಣ.
ಕ್ರಿ. ಶ. 1971 ರ ಡಿಸೆಂಬರ್ 4 ರಂದು, ಸಂಜೆ ಪಾಕಿಸ್ತಾನವು ಭಾರತದ ಮೇಲೆ ಆಕ್ರಮಣ ಮಾಡಿದ್ದರಿಂದ, ಪಾಕಿಸ್ತಾನ ಗಡಿಯ ಸಮೀಪವಿರುವ ಲೋಂಗೇವಾಲಾ ಎಂಬ ಪ್ರದೇಶದಲ್ಲಿ ಹೋರಾಡಬೇಕಾಯಿತು.
ಭಾರತದ 23 ಪಂಜಾಬ್ ರೆಜಿಮೆಂಟ್ನ 120 ಸೈನಿಕರು ಇರುವ ವಾಯುಪಡೆಯು ಕೆಚ್ಚೆದೆಯಿಂದ ಹೋರಾಡಿ, ಪಾಕಿಸ್ತಾನದ ಇಡೀ ಟ್ಯಾಂಕ್ ರೆಜಿಮೆಂಟ್ ಮತ್ತು ಸಾವಿರಾರು ಕಾಲಾಳು ಪಡೆಗಳನ್ನು ಹಿಮ್ಮೆಟ್ಟಿಸಿದೆ.
………..ಮುಂದುವರಿಯುವುದು.
ಫೋಟೋ ಗಳಿಗಾಗಿ ಕೆಳಗಿನ ಲಿಂಕ್ ನೋಡಿ,
https://drive.google.com/folderview?id=14qu8z5142s4UX5dqtu4RWT6GaBwWeQHP
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ