ಬುಧವಾರ, ಆಗಸ್ಟ್ 29, 2018

ದಿನೇಶ ಉಪ್ಪೂರ:

*#ನನ್ನೊಳಗೆ - 2*

ಭಾಗ - 5


ನಾನು ಇವಳಿಗೆ ಹೇಳಬೇಕು.

ಇದು ನಾನು ಬರೆಯುವುದಲ್ಲ.

ಯಾರೊ ನನ್ನಿಂದ ಇದನ್ನು ಬರೆಸುತ್ತಿದ್ದಾರೆ .

ತಡೆಯೇ ಇಲ್ಲ ಪುಂಖಾನುಪುಂಖವಾಗಿ ಬಾಣ ಬಿಟ್ಟಹಾಗೆ ಸರಾಗವಾಗಿ ಬರೆಯುತ್ತಿದ್ದೇನೆ .

*****

ರಾತ್ರಿ ಈಗ.

ಇವಳು ಆಗ ಕಣ್ಣು ಬಿಟ್ಟು, ನೋಡಿ ಹೇಳಿದಳು,

“ಸಾಕು ಮಲಗಿ. ಬೆಳಿಗ್ಗೆ ಬರೆದರಾಯಿತು .

“ಆಯಿತು”. ನಾನೆಂದೆ, “ ನೀನು ಮಲಗು”.
***


ವೈದೇಹಿ , ಇಂದು ಬಹು ದೊಡ್ಡ ಬರಹಗಾರರು. ಕಾರಂತರನ್ನು ಹೊರತುಪಡಿಸಿ. ಲೈಬ್ರರಿಯಲ್ಲಿ ಒಂದು ಕಪಾಟಿನಲ್ಲಿ ಬರೆದು ಬಿಟ್ಟಿದ್ದಾರೆ.

“ವೈದೇಹಿ ಬರಹಗಳು”

ನಾನು ಕುತೂಹಲದಿಂದ ಆ ಕಪಾಟು ತೆರೆದು ನೋಡಿದರೆ, ಅಲ್ಲಿ ಅವರ ಬರಹಗಳು ಇರಲೇ ಇಲ್ಲ .

ಯಾರ್ಯಾರದೋ ಸಾಮಾನ್ಯ ಪುಸ್ತಕಗಳು. ಕಾರಂತ ಕುವೆಂಪುರವರದೂ ಹಾಗೆಯೆ.

ಒಮ್ಮೆ ವೈದೇಹಿಯವರಿಗೆ ಹೇಳಬೇಕು.

******


ಒಮ್ಮೆ ಅವರು ನನಗೆ ಫೋನ್ ಮಾಡಿದ್ದರು.

ಅವರೂ ನಮ್ಮ ಒಂದು ವಾಟ್ಸಾಪ್ ಗ್ರೂಪ್ ನಲ್ಲಿ ಇದ್ದರು.

“ನಾನು ವೈದೇಹಿ,  ನನಗೆ ಮೊಬೈಲಿನಲ್ಲಿ ಬರೆಯಲು ಬರುವುದಿಲ್ಲ”.

ಹಾಗಾಗಿ ಫೋನ್ ನಲ್ಲಿ.   “ನಿಮ್ಮ ಬರಹಗಳು ತುಂಬಾ ಚೆನ್ನಾಗಿದೆ”

ನನಗೆ ರೋಮಾಂಚನ!.

ಅವರೆಲ್ಲಿ ನಾನೆಲ್ಲಿ ?

***********


ನನ್ನ ಪುಸ್ತಕ ತೊಂಬತ್ತೈದು ಕಂತು ತಲುಪಿದಾಗ,  ಅದನ್ನು ಪರಿಷ್ಕರಿಸಿ ಅರವತ್ತೈದಕ್ಕೆ ಇಳಿಸಿ, ಇಷ್ಟು ಸಾಕು ಎಂದು ಒಂದು ಪುಸ್ತಕ ಮಾಡಿ ಅವರಿಗೆ ಫೋನ್ ಮಾಡಿದೆ.

“ಮೇಡಂ,  ಆವತ್ತು ನೀವು ನನ್ನ “ನನ್ನೊಳಗೆ” ಬರಹವನ್ನು ಮೆಚ್ಚಿ ಎರಡು ಮಾತು ಹೇಳಿದ್ದೀರಿ. ಈಗ ಮುಗಿದಿದೆ.

ಒಮ್ಮೆ ತಂದು ಕೊಡಲೇ?   ಓದಿ ಅಭಿಪ್ರಾಯ ತಿಳಿಸಬಹುದೇ?

“ಏನು ಪುಸ್ತಕ ಮಾಡುತ್ತೀರಾ ?  ತನ್ನಿ . ನೋಡುತ್ತೇನೆ”

ಅಂದರು ನಮ್ರನಾಗಿ.

ಓಡಿದೆ.  ಅವರ ಮಣಿಪಾಲದ ಅನಂತಪುರದ ಮನೆಗೆ ಹುಡುಕಿಕೊಂಡು ಹೋದೆ. ಅವರಿದ್ದರು .

*********



ನನಗೆ ಪುಸ್ತಕ ಮಾಡುವ ಉದ್ದೇಶ ಇಲ್ಲ.

ಆದರೆ , ನೀವೂ ಒಮ್ಮೆ ಓದಿನೋಡಿದರೆ ನನಗೆ ಸಮಾಧಾನ.

ಅದರಲ್ಲಿ ತೀರಾ ಖಾಸಗಿಯಾದ ವಿಷಯಗಳು ಇವೆ . ಅದೆಲ್ಲ ಯಾಕೆ? ಎಲ್ಲರ ಜೀವನದಲ್ಲೂ ಇರುತ್ತದೆ. ಇರುವುದೆಲ್ಲವ ಬಿಟ್ಟು….  ಸಾಕು ಬಿಡಿ ” ಅಂದವರಿದ್ದಾರೆ.

ನೋಡುವ ಎಂದೆ.

ಅವರಿಗೆ ಎಲ್ಲವೂ ವಿಸ್ಮಯಗಳೆ ?

*********



ಮುಗ್ದ ಮನಸ್ಸಿನ ಮಗಳು.

ಕುಂದಾಪುರ ಕನ್ನಡವನ್ನೇ ಮಾತಾಡುವವರು. ಬರೆಯುವವರು. ಅವರು.

ಯುಟ್ಯೂಬ್ ನಲ್ಲಿ ಅವರ ಯಾವುದೋ  ಸಂದರ್ಶನ ನೋಡಿದ್ದೆ.

ಅಲ್ಲಿಯೂ ಮುಜುಗರವಾಗುವಷ್ಟು ಕುಂದಾಪುರ ಕನ್ನಡ.

ನನಗೆ ಯಾಕೋ ಗೌರವ. ಆಕೆಯ ಮೇಲೆ.

********



ಒಂದು ಹದಿನೈದು ದಿನದಲ್ಲಿ ನನಗೆ ಫೋನ್ ಮಾಡಿದರು.

“ಒಂದು ಪೇಜು ಬರೆದಿಟ್ಟಿದ್ದೇನೆ. ಪುಸ್ತಕ ಚೆನ್ನಾಗಿದೆ. ನೀವು ಪುಸ್ತಕ ಮಾಡುವಾಗ ಮುನ್ನುಡಿಯ ಬಗ್ಗೆ ಬರೆಯಲು ನೋಡುವೆ. ಅಂದರು. ಹೋದೆ.

“ಈ ನಿಮ್ಮ ಪುಸ್ತಕ ನನಗೆ. ಇಗೊ ಈ ಒಂದು ಹಾಳೆ ನಿಮಗೆ”.

ನನಗೆ ಮುಜುಗರವಾಯಿತು.

ಅವರೆಲ್ಲಿ ?  ನಾನೆಲ್ಲಿ?

*”****



“ನಿಮ್ಮ ಪುಸ್ತಕ ಯಾವುದಾದರೂ ಇದೆಯ?

ನಾನು ಈಗ ತಾನೆ ಓದಲಿಕ್ಕೆ ಶುರು ಮಾಡಿದ್ದೇನೆ”

ಅವರದು ಆ ಮಟ್ಟಿಗೆ ನಿಷ್ಠುರ. ಈಗ ನನ್ನಲ್ಲಿ ಯಾವುದೂ ಇಲ್ಲ.

ಇದ್ದರೆ ಕೊಡುತ್ತಿದ್ದೆ . ನನಗೆ ಕೊಡಬಾರದೆಂದೇನೂ ಇಲ್ಲ.

ನನ್ನ ಸಮಗ್ರ ಕತೆಗಳು ಪ್ರಕಟವಾಗಿದೆ. ರಿಯಾಯಿತಿ ದರದಲ್ಲಿ ಸಿಗುತ್ತದೆ.

ನೀವು ಬುಕ್ ಮಾಡಿ ಹಣ ಕೊಟ್ಟು ತರಿಸಿಕೊಳ್ಳಬಹುದು.

“ಇಗೊಳ್ಳಿ ನೀವು ಕೇಳಿದ್ದಕ್ಕೆ . ನಾನೇ ಬರೆದದ್ದು.

“ಅಮ್ಮಚ್ಚಿ ಯೆಂಬ ನೆನಪು ” ಅವರ ಪುಸ್ತಕ ಕೊಟ್ಟರು…….

ಮನೆಗೆ ತಂದು ಓದಿದೆ.

ಹಳ್ಳಿಯ ಸೊಗಡು ಇರುವ ಬರಹಗಳು.

ಆಪ್ತವಾದವುಗಳು.

ಅದರಲ್ಲಿ ಒಂದು ಸಿನಿಮಾ ಆಗುತ್ತಿದೆಯಂತೆ.

ಅದನ್ನೂ ಹೇಳಲಿಲ್ಲ ಅವರು.

“************


ನಿನ್ನೆ , ಭೀಮಣ್ಣ ತಹಶೀಲ್ದಾರ್ ಎನ್ನುವ ನನ್ನ ಜೀವನದ ದಿಕ್ಕನ್ನು ಬದಲಿಸಿದ ಶಿವಮೊಗ್ಗದ ಒಬ್ಬ ಡಾಕ್ಟರ್ ಮಹಾನುಭಾವರು ಅದು  ಹೇಗೋ ನಂಬರ್ ಹುಡುಕಿ ತೆಗೆದು ಫೋನ್ ಮಾಡಿದ್ದರು.

ಅವರು ಯಾರೆಂದು ನಿಮಗೆ ನನ್ನ “ನನ್ನೊಳಗೆ-1” ಓದಿದ್ದರೆ ಖಂಡಿತಾ ನೆನಪಿರಬಹುದು.

ಅವರ ಒಂದೇ ಒಂದು ಸಹಿಯಿಂದ ನನಗೆ ಕೆಲಸ ಸಿಕ್ಕಿತ್ತು ,ನಮ್ಮ ಆಗಿನ ಕೆಇಬಿಯಲ್ಲಿ.

******

ಹೌದು ಅವರಿಗೂ ಆತ್ಮ ಕತೆ ಬರೆಯಬೇಕು ಎನ್ನಿಸಿತ್ತಂತೆ.

“ನೀವು ಬರೆಯುವ ಭಾಷೆ ಸರಳವಾಗಿದೆ. ಚೆನ್ನಾಗಿದೆ. ಒಮ್ಮೆ ನಿಮ್ಮನ್ನು ಭೇಟಿಯಾಗುವೆ. ಮಾತಾಡೋಣವೇ?  ಸಹಾಯ ಮಾಡುವಿರಾ?”

ಎಂದು ವಿನಯದಿಂದ ಕೇಳಿದರು.

ಅಬ್ಬಾ ಅದಕ್ಕಿಂತ ಧನ್ಯತೆ ಇನ್ನು ಬೇರೆ ಇದೆಯಾ?

‘ಬನ್ನಿ” ಎಂದಿದ್ದೇನೆ.



*ಮುಂದುವರಿಯುವುದು…………..*

1 ಕಾಮೆಂಟ್‌:

  1. ಅನುಭವಾಯುಕ್ತ ಯಾವುದೇ ಬರವಣಿಗೆ ಇನ್ನೊಂದು ಜೀವಕ್ಕೆ ಏನನ್ನೂ ಕೊಡಬಹುದು .....
    ತಹಸೀಲ್ದಾರ್ ಡಾಕ್ಟರ ಅನುಭವ ತುಂಬಾ ಚೆನ್ನಾಗಿರುತ್ತೆ....ಬರೆಸಿ....

    ಪ್ರತ್ಯುತ್ತರಅಳಿಸಿ