ದಿನೇಶ ಉಪ್ಪೂರ:
*#ನನ್ನೊಳಗೆ - 2*
ಭಾಗ - 6
ಇರಲಿ. ಮತ್ತೆ ದೊಡ್ಡವರ ಜೀವನ ಚರಿತ್ರೆಯ ಹುಡುಕಾಟ.
ಏನು ಮತ್ತು ಹೇಗೆ ಬರೆಯುತ್ತಾರೆ ಇವರೆಲ್ಲ ?
*******
ಅನಂತ ಮೂರ್ತಿಯ ಸುರಗಿ ಸಿಕ್ಕಿತ್ತು.
ಲೈಬ್ರರಿಯಿಂದ ತಂದು ಓದಿದೆ.
ತುಂಬಾ ಆಧುನಿಕವಾಗಿ ಯೋಚಿಸುವ ಬರಹಗಾರರು. ಇದ್ದದ್ದನ್ನು ಇದ್ದಂತೆ ಹೇಳುವವರು.
ನಾನೂ ಅವರ ಹಲವು ಭಾಷಣಗಳನ್ನು ಕೇಳಿದ್ದೆ. ಇಂಟರ್ ನೆಟ್ ನಲ್ಲಿ ಕಂಡಿದ್ದೆ.
ಅಂತಹ ಒಳ್ಳೆಯ ಪುಸ್ತಕ ಅನ್ನಿಸಲಿಲ್ಲ.
ಬರೆಯುವುದು ಅಂದರೆ ಎಲ್ಲಿಯವರೆಗೆ ?
ಹೇಳಬಾರದ , ಹೇಳಲಾಗದ ತೀರಾ ಖಾಸಗಿ ವಿಷಯಗಳನ್ನು ಬರೆದು ಬಿಟ್ಟಿದ್ದಾರೆ.
“ ಆತ್ಮ ಚರಿತ್ರೆ ಅಂದರೆ ಅದಾ?”
ಅದು ಅಪೂರ್ಣ.
ಬಹಳಷ್ಟು ಬರೆಯದೇ ಬಿಟ್ಟಿದ್ದಾರೆ.
***********
ಮತ್ತೆ ಹುಡುಕಾಡಿದೆ.
ಆಗ ಸಿಕ್ಕಿದ್ದು ಪಾಪು ಆತ್ಮಕತೆ.
ಎಲ್ಲವೂ, ಎಲ್ಲೆಲ್ಲಿಯೂ ತಾನು ತಾನು ಅಂತ ಬರೆದುಕೊಂಡಿದ್ದಾರೆ.
ನೀವೂ ಓದಿರಬಹುದು.
ಅದೂ ಇಷ್ಟವಾಗಲಿಲ್ಲ.
*******
ಮುಂದೆ ಅ.ನ.ಕೃ.ರವರ ಆತ್ಮ ಚರಿತ್ರೆ ಸಿಕ್ಕಿತು.
ತನ್ನ ಬದುಕನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.
ಬಹಳ ಪ್ರಾಮಾಣಿಕವಾಗಿ.
ದಿನಾಂಕ ಘಳಿಗೆ ಸಹಿತ.
ಡೈರಿ ಬರೆಯುತ್ತಿದ್ದಿರಬೇಕು .
ಎಲ್ಲವನ್ನೂ ದಾಖಲು ಮಾಡುವ ಧಾವಂತ.
ನಾನು ಸಣ್ಣವ.
ಅವರೆಲ್ಲರಷ್ಟು ತಿಳಿದವನಲ್ಲ.
*********
ಮುಂದೆ ನನಗೆ ಸಿಕ್ಕಿದ್ದು ರವಿ ಬೆಳೆಗೆರೆಯ ಖಾಸ್ ಬಾತ್ .
ಅವರ ಬರವಣಿಗೆಯ ಶೈಲಿ ನಿರರ್ಗಳ. ಯಾರನ್ನೂ ಹುಚ್ಚು ಹಿಡಿಸೀತು. ಆದರೆ
ಅವರು ಬರೆದದ್ದಕ್ಕಿಂತ ಹೊರಗೆ ಮಾಡಿಕೊಂಡ ರಾದ್ದಾಂತಗಳೆ ಹೆಚ್ಚು.
ಯುಟ್ಯೂಬ್ ಹುಡುಕಿದರೆ ಸಿಗುತ್ತದೆ.
ಬೆಳೆಗೆರೆಯ ಬದುಕು, ಇರಲಿ.
************
ಭೈರಪ್ಪ ನವರ ಭಿತ್ತಿಯನ್ನು ಮೊದಲೇ ಓದಿದ್ದೆ.
ಮತ್ತೆ ತಂದು ಓದಿದೆ.
ಬಹಳ ಆಪ್ತವೆಂದು ಅನಿಸಿದರೂ, ಅದೆಲ್ಲ ಸತ್ಯ ಅನ್ನಿಸಲಿಲ್ಲ.
*********
ರಾಮದಾಸರ
“ಎಳೆನಿಂಬೆ” ಯನ್ನೂ ಓದಿದೆ…….
ಅದೂ ಅಪೂರ್ಣ.
ಅಸಮರ್ಥನೀಯ.
ಬಹುಷ್ಯ ಅವರು, ಅವರ ಎಳವೆಯಲ್ಲಿ ಬರೆದಿರಬೇಕು.
******
ಸಂಜೀವರ “ಸಂಜೀವನ” ನೋಡಿದೆ.
ಬರವಣಿಗೆಯ ಆ ಶೈಲಿ, ಹೊಸತನ ಗಮನ ಸೆಳೆಯುತ್ತದೆ.
ಸಂಜೀವರು ಬಹಳ ಭಾವುಕರಾಗಿ ತನ್ನನ್ನು ತೆರೆದುಕೊಂಡಿದ್ದಾರೆ. ಆದರೆ,
ಉಹೂಂ.
ಅಲ್ಲೊಂದು ಇಲ್ಲೊಂದು ನೆನಪುಗಳನ್ನು ಗುಂಪಾಗಿ ಇಟ್ಟಂತೆ ಇದೆ.
ಅದೂ ಹಿತವಾಗಲಿಲ್ಲ.
*********
ಮೊಗೇರಿ ಗೋಪಾಲ ಕೃಷ್ಣ ಅಡಿಗರ
“ನೆನಪಿನ ಘಣಿಯಿಂದ”
ಎಸ್. ವಿ. ಭಟ್ಟರ ಮನೆಯಿಂದ ಅವರನ್ನು ಕೇಳಿ, ಓದಲು ತಂದೆ.
ಓದಲೇ ಇಲ್ಲ.
*******
ಸಾಕು.
ನಾನು ಇನ್ನು ಓದಬೇಕಾಗಿಲ್ಲ .
ಬರೆಯಬೇಕು.
ಆದರೆ ಅದು ಜನ “ಸಾಕು”. ಅನ್ನುವಷ್ಟು ಆಗಬಾರದು.
ಹೌದು ಎಸ್. ವಿ. ಭಟ್ಟರು ಆವತ್ತು ಯಾವುದೋ ವಿಷಯಕ್ಕೆ ಹೇಳಿದ್ದರು.
“ನಿನಗೆ ಮಾಡಲು ಬಹಳ ಇದೆ. ನೀನು ಬರೆಯಬೇಕು. ಬರೆಯಬಲ್ಲೆ. ಓದಬೇಕು .
ಅವರು ಸಾಕಷ್ಟು ವಿವಿಧ ರೀತಿಯ ಜನರನ್ನು ಕಂಡವರು.
******
*ಮುಂದುವರಿಯುವುದು……….*
*#ನನ್ನೊಳಗೆ - 2*
ಭಾಗ - 6
ಇರಲಿ. ಮತ್ತೆ ದೊಡ್ಡವರ ಜೀವನ ಚರಿತ್ರೆಯ ಹುಡುಕಾಟ.
ಏನು ಮತ್ತು ಹೇಗೆ ಬರೆಯುತ್ತಾರೆ ಇವರೆಲ್ಲ ?
*******
ಅನಂತ ಮೂರ್ತಿಯ ಸುರಗಿ ಸಿಕ್ಕಿತ್ತು.
ಲೈಬ್ರರಿಯಿಂದ ತಂದು ಓದಿದೆ.
ತುಂಬಾ ಆಧುನಿಕವಾಗಿ ಯೋಚಿಸುವ ಬರಹಗಾರರು. ಇದ್ದದ್ದನ್ನು ಇದ್ದಂತೆ ಹೇಳುವವರು.
ನಾನೂ ಅವರ ಹಲವು ಭಾಷಣಗಳನ್ನು ಕೇಳಿದ್ದೆ. ಇಂಟರ್ ನೆಟ್ ನಲ್ಲಿ ಕಂಡಿದ್ದೆ.
ಅಂತಹ ಒಳ್ಳೆಯ ಪುಸ್ತಕ ಅನ್ನಿಸಲಿಲ್ಲ.
ಬರೆಯುವುದು ಅಂದರೆ ಎಲ್ಲಿಯವರೆಗೆ ?
ಹೇಳಬಾರದ , ಹೇಳಲಾಗದ ತೀರಾ ಖಾಸಗಿ ವಿಷಯಗಳನ್ನು ಬರೆದು ಬಿಟ್ಟಿದ್ದಾರೆ.
“ ಆತ್ಮ ಚರಿತ್ರೆ ಅಂದರೆ ಅದಾ?”
ಅದು ಅಪೂರ್ಣ.
ಬಹಳಷ್ಟು ಬರೆಯದೇ ಬಿಟ್ಟಿದ್ದಾರೆ.
***********
ಮತ್ತೆ ಹುಡುಕಾಡಿದೆ.
ಆಗ ಸಿಕ್ಕಿದ್ದು ಪಾಪು ಆತ್ಮಕತೆ.
ಎಲ್ಲವೂ, ಎಲ್ಲೆಲ್ಲಿಯೂ ತಾನು ತಾನು ಅಂತ ಬರೆದುಕೊಂಡಿದ್ದಾರೆ.
ನೀವೂ ಓದಿರಬಹುದು.
ಅದೂ ಇಷ್ಟವಾಗಲಿಲ್ಲ.
*******
ಮುಂದೆ ಅ.ನ.ಕೃ.ರವರ ಆತ್ಮ ಚರಿತ್ರೆ ಸಿಕ್ಕಿತು.
ತನ್ನ ಬದುಕನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.
ಬಹಳ ಪ್ರಾಮಾಣಿಕವಾಗಿ.
ದಿನಾಂಕ ಘಳಿಗೆ ಸಹಿತ.
ಡೈರಿ ಬರೆಯುತ್ತಿದ್ದಿರಬೇಕು .
ಎಲ್ಲವನ್ನೂ ದಾಖಲು ಮಾಡುವ ಧಾವಂತ.
ನಾನು ಸಣ್ಣವ.
ಅವರೆಲ್ಲರಷ್ಟು ತಿಳಿದವನಲ್ಲ.
*********
ಮುಂದೆ ನನಗೆ ಸಿಕ್ಕಿದ್ದು ರವಿ ಬೆಳೆಗೆರೆಯ ಖಾಸ್ ಬಾತ್ .
ಅವರ ಬರವಣಿಗೆಯ ಶೈಲಿ ನಿರರ್ಗಳ. ಯಾರನ್ನೂ ಹುಚ್ಚು ಹಿಡಿಸೀತು. ಆದರೆ
ಅವರು ಬರೆದದ್ದಕ್ಕಿಂತ ಹೊರಗೆ ಮಾಡಿಕೊಂಡ ರಾದ್ದಾಂತಗಳೆ ಹೆಚ್ಚು.
ಯುಟ್ಯೂಬ್ ಹುಡುಕಿದರೆ ಸಿಗುತ್ತದೆ.
ಬೆಳೆಗೆರೆಯ ಬದುಕು, ಇರಲಿ.
************
ಭೈರಪ್ಪ ನವರ ಭಿತ್ತಿಯನ್ನು ಮೊದಲೇ ಓದಿದ್ದೆ.
ಮತ್ತೆ ತಂದು ಓದಿದೆ.
ಬಹಳ ಆಪ್ತವೆಂದು ಅನಿಸಿದರೂ, ಅದೆಲ್ಲ ಸತ್ಯ ಅನ್ನಿಸಲಿಲ್ಲ.
*********
ರಾಮದಾಸರ
“ಎಳೆನಿಂಬೆ” ಯನ್ನೂ ಓದಿದೆ…….
ಅದೂ ಅಪೂರ್ಣ.
ಅಸಮರ್ಥನೀಯ.
ಬಹುಷ್ಯ ಅವರು, ಅವರ ಎಳವೆಯಲ್ಲಿ ಬರೆದಿರಬೇಕು.
******
ಸಂಜೀವರ “ಸಂಜೀವನ” ನೋಡಿದೆ.
ಬರವಣಿಗೆಯ ಆ ಶೈಲಿ, ಹೊಸತನ ಗಮನ ಸೆಳೆಯುತ್ತದೆ.
ಸಂಜೀವರು ಬಹಳ ಭಾವುಕರಾಗಿ ತನ್ನನ್ನು ತೆರೆದುಕೊಂಡಿದ್ದಾರೆ. ಆದರೆ,
ಉಹೂಂ.
ಅಲ್ಲೊಂದು ಇಲ್ಲೊಂದು ನೆನಪುಗಳನ್ನು ಗುಂಪಾಗಿ ಇಟ್ಟಂತೆ ಇದೆ.
ಅದೂ ಹಿತವಾಗಲಿಲ್ಲ.
*********
ಮೊಗೇರಿ ಗೋಪಾಲ ಕೃಷ್ಣ ಅಡಿಗರ
“ನೆನಪಿನ ಘಣಿಯಿಂದ”
ಎಸ್. ವಿ. ಭಟ್ಟರ ಮನೆಯಿಂದ ಅವರನ್ನು ಕೇಳಿ, ಓದಲು ತಂದೆ.
ಓದಲೇ ಇಲ್ಲ.
*******
ಸಾಕು.
ನಾನು ಇನ್ನು ಓದಬೇಕಾಗಿಲ್ಲ .
ಬರೆಯಬೇಕು.
ಆದರೆ ಅದು ಜನ “ಸಾಕು”. ಅನ್ನುವಷ್ಟು ಆಗಬಾರದು.
ಹೌದು ಎಸ್. ವಿ. ಭಟ್ಟರು ಆವತ್ತು ಯಾವುದೋ ವಿಷಯಕ್ಕೆ ಹೇಳಿದ್ದರು.
“ನಿನಗೆ ಮಾಡಲು ಬಹಳ ಇದೆ. ನೀನು ಬರೆಯಬೇಕು. ಬರೆಯಬಲ್ಲೆ. ಓದಬೇಕು .
ಅವರು ಸಾಕಷ್ಟು ವಿವಿಧ ರೀತಿಯ ಜನರನ್ನು ಕಂಡವರು.
******
*ಮುಂದುವರಿಯುವುದು……….*
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ