ಮಂಗಳವಾರ, ಅಕ್ಟೋಬರ್ 29, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೧೫

ಈ ಪ್ರದೇಶದಲ್ಲಿನ ಬರಗಾಲದಿಂದ ಬಳಲುತ್ತಿರುವ ರೈತರಿಗೆ ಉದ್ಯೋಗ ನೀಡುವುದು ಇದರ ಆರಂಭಿಕ ಉದ್ದೇಶವಾಗಿದ್ದರಿಂದ ಅರಮನೆಯನ್ನು ನಿಧಾನಗತಿಯಲ್ಲಿ ನಿರ್ಮಿಸಲಾಯಿತು. 1929 ರಲ್ಲಿ ಅಡಿಪಾಯ ಹಾಕಲಾಯಿತು. ಇದರ ನಿರ್ಮಾಣದಲ್ಲಿ ಸುಮಾರು 2,000 ದಿಂದ 3,000 ಜನರು ಕೆಲಸ ಮಾಡುತ್ತಿದ್ದರು. ಮಹಾರಾಜರಿಂದ ಅರಮನೆಯ ಉದ್ಯೋಗವು 1943 ರಲ್ಲಿ ಪೂರ್ಣಗೊಂಡ ನಂತರ ಮತ್ತು ಭಾರತೀಯ ಸ್ವಾತಂತ್ರ್ಯದ ಅವಧಿಗೆ ಹತ್ತಿರವಾಯಿತು. ಅರಮನೆಯನ್ನು ನಿರ್ಮಿಸಲು ಅಂದಾಜು 11 ಮಿಲಿಯನ್ ರೂಪಾಯಿ ಆಗಿದೆ.

ಅರಮನೆಗೆ ಆಯ್ಕೆ ಮಾಡಲಾದ ಸ್ಥಳವು ಜೋಧ್‌ಪುರದ ಹೊರ ಮಿತಿಯಲ್ಲಿರುವ ಚಿತ್ತಾರ್ ಬೆಟ್ಟ ಎಂದು ಕರೆಯಲ್ಪಡುವ ಬೆಟ್ಟದ ಮೇಲೆ ಇತ್ತು, ಅಲ್ಲಿ ಯಾವುದೇ ನೀರು ಸರಬರಾಜು ಲಭ್ಯವಿಲ್ಲ ಮತ್ತು ಯಾವುದೇ ಸಸ್ಯವರ್ಗವು ಬೆಟ್ಟದ ಇಳಿಜಾರುಗಳಾಗಿ ಬೆಳೆಯುವುದಿಲ್ಲ. ಕಲ್ಲುಗಳು, ಮರಳುಗಲ್ಲಿನ ಕಲ್ಲುಗಣಿಗಳು ಸಾಕಷ್ಟು ದೂರದಲ್ಲಿರುವುದರಿಂದ ಅಗತ್ಯವಿರುವ ಕಟ್ಟಡ ಸಾಮಗ್ರಿಗಳು ಹತ್ತಿರದಲ್ಲಿರಲಿಲ್ಲ.

ಮಹಾರಾಜರು ತಮ್ಮ ಯೋಜನೆಯನ್ನು ಫಲಪ್ರದವಾಗಿಸುವ ದೂರದೃಷ್ಟಿಯನ್ನು ಹೊಂದಿದ್ದರಿಂದ, ಕಟ್ಟಡ ಸಾಮಗ್ರಿಗಳನ್ನು ಸಾಗಿಸಲು ಕ್ವಾರಿ ಸ್ಥಳಕ್ಕೆ ರೈಲ್ವೆ ಮಾರ್ಗವನ್ನು ನಿರ್ಮಿಸಿದರು. ರೈಲ್ವೆ ಮೂಲಕ ಸಾಗಿಸುವ ಮರಳುಗಲ್ಲನ್ನು ಗಾರೆ ಬಳಸದೆ ಇಡಲು ಅನುಕೂಲವಾಗುವಂತೆ ಇಂಟರ್ಲಾಕಿಂಗ್ ಕೀಲುಗಳನ್ನು ಹೊಂದಿರುವ ದೊಡ್ಡ ಬ್ಲಾಕ್ ಗಳಾಗಿ ಮಾಡಿ ಅಳವಡಿಸಿದ್ದರು.

ಅರಮನೆಯನ್ನು ಎರಡು ರೆಕ್ಕೆಗಳಿಂದ "ಡನ್-ಬಣ್ಣದ" (ಚಿನ್ನದ - ಹಳದಿ) ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಮಕ್ರಾನಾ ಮಾರ್ಬಲ್ ಅನ್ನು ಸಹ ಬಳಸಲಾಗಿದೆ, ಮತ್ತು ಬರ್ಮೀಸ್ ತೇಗದ ಮರವನ್ನು ಆಂತರಿಕ ಮರಗೆಲಸಕ್ಕೆ ಬಳಸಲಾಗುತ್ತದೆ. ಪೂರ್ಣಗೊಂಡಾಗ ಅರಮನೆಯಲ್ಲಿ 347 ಕೊಠಡಿಗಳು, ಹಲವಾರು ಪ್ರಾಂಗಣಗಳು ಮತ್ತು 300 ಜನರು ವಾಸಿಸುವ ದೊಡ್ಡ ಔತಣಕೂಟ ಸಭಾಂಗಣವಿತ್ತು. ವಾಸ್ತುಶಿಲ್ಪದ ಶೈಲಿಯನ್ನು ಅಂದಿನ ಪ್ರಚಲಿತದಲ್ಲಿರುವ ಬ್ಯೂಕ್ಸ್ ಆರ್ಟ್ಸ್ ಶೈಲಿಯನ್ನು ಪ್ರತಿನಿಧಿಸುತ್ತದೆ ಎಂದು ಪರಿಗಣಿಸಲಾಗುತ್ತದೆ, ಇದನ್ನು ಇಂಡೋ-ಡೆಕೊ ಶೈಲಿ ಎಂದೂ ಕರೆಯುತ್ತಾರೆ.

 ಆದಾಗ್ಯೂ, ರಾಜಮನೆತನದ ದುರಂತ ಘಟನೆಗಳ ನಂತರ ಹಲವು ವರ್ಷಗಳಿಂದ ಅರಮನೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿಲ್ಲ. ಕೇವಲ ನಾಲ್ಕು ವರ್ಷಗಳ ಕಾಲ ಈ ಸ್ಥಳದಲ್ಲಿಯೇ ಇದ್ದ ಉಮೈದ್ ಸಿಂಗ್ 1947 ರಲ್ಲಿ ನಿಧನರಾದರು. ಅವರ ನಂತರ ಬಂದ ಹನುಮಂತ್ ಸಿಂಗ್ ಕೂಡ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು; ಅವರು ಕೇವಲ 1952 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದರು ಮತ್ತು ಈ ಗೆಲುವಿನ ನಂತರ ಮನೆಗೆ ಹಿಂದಿರುಗುತ್ತಿದ್ದಾಗ ಅವರ ವಿಮಾನ ಅಪಘಾತಕ್ಕೀಡಾಗಿ ಅವರು ನಿಧನರಾದರು. ತನ್ನ ತಂದೆಯ ನಂತರ ಬಂದ ಗಜ್ ಸಿಂಗ್ II 1971 ರಲ್ಲಿ ಅರಮನೆಯ ಒಂದು ಭಾಗವನ್ನು ಹೋಟೆಲ್ ಆಗಿ ಪರಿವರ್ತಿಸಲು ನಿರ್ಧರಿಸಿದರು.

ಅರಮನೆಯ ಹಲವಾರು ಕೋಣೆಗಳು, ಆಯುಧಗಳು, ಗಡಿಯಾರಗಳು ಅಲಂಕಾರಿಕ ಸಾಮಗ್ರಿಗಳು, ದೊಡ್ಡ ದೊಡ್ಡ ಪ್ರಾಂಗಣಗಳು, ಪಲ್ಲಕಿಗಳು ರಾಜರು ಕುಳಿತು ಸಮಾಲೋಚನೆ ಮಾಡುತ್ತಿದ್ದ ದರ್ಬಾರ್ ಸ್ಥಳವನ್ನು ಜೊತೆಗೆ, ಅಲ್ಲಲ್ಲಿ ರಾಜಸ್ಥಾನೀ ವೇಷಭೂಷಣದಲ್ಲಿ ದೊಡ್ಡ ಮೀಸೆ ಹೊತ್ತು ನಗುತ್ತಾ ಸ್ವಾಗತಿಸುವ ಸೇವಕರನ್ನು ಕಂಡೆವು.

ಇದರ ಒಂದು ಭಾಗವೇ ಆಗಿರುವ, ತಾಜ್ ಹೋಟೆಲ್ ನಲ್ಲಿಯೇ, ನಟಿ ಪ್ರಿಯಾಂಕಾ ಚೋಪ್ರಾರ ವಿವಾಹ ನಡೆದಿತ್ತಂತೆ. ಅಲ್ಲಿ ರೂಮುಗಳ ಬಾಡಿಗೆ ಲಕ್ಷಗಳಲ್ಲಿ ಇರುತ್ತದೆ ಎಂದು ನಮ್ಮ ಗೈಡ್ ತಿಳಿಸಿದ. ಅವನು ಈಗಿನ ರಾಜ ಗಜ ಸಿಂಗ್ ಗೆ ಜಿಮ್ ಹೇಳಿ ಕೊಡುವವನಂತೆ. ವಿರಾಮವಿರುವ ಹೊತ್ತಿನಲ್ಲಿ ಗೈಡ್ ಆಗಿ ಕೆಲಸ ಮಾಡುತ್ತಿದ್ದ.

ಅಲ್ಲಿಂದ ಹೊರಬಂದ ನಾವು ಅನತಿ ದೂರದಲ್ಲಿ ಇದ್ದ ಬೆಂಚಿನ ಮೇಲೆ ಕುಳಿತು ವಿಶ್ರಾಂತಿ ಪಡೆದೆವು. ನಮ್ಮಲ್ಲಿ ಕೆಲವರು ಅಲ್ಲಿಯೇ ಸನಿಹದಲ್ಲಿದ್ದ ಹಳೆಯ ಕಾರುಗಳ ಪ್ರದರ್ಶನಾಲಯಕ್ಕೆ ಹೋಗಿ ಬಂದರು. ಅಲ್ಲಿಂದ ನಾವು ನಮ್ಮ ಅಪಾರ್ಟ್ ಮೆಂಟ್ ಗೆ ಹಿಂತಿರುಗಿದೆವು.
ರಾತ್ರಿ ಊಟವನ್ನು ಮಾಡಿದ ನಾವು, ಮಕ್ಕಳೆಲ್ಲ ಉತ್ಸಾಹ ತೋರಿಸಿದ್ದರಿಂದ ಒಟ್ಟಾಗಿ ಸೇರಿ ಇಸ್ಪೀಟ್ ನ್ನು ಆಡುತ್ತಿದ್ದೆವು. ನನಗೆ ಗೊತ್ತಿರುವುದು ಕತ್ತೆ ಮತ್ತು ಸೆಟ್ ಮಾಡುವುದು ಮಾತ್ರಾ. ಆದ್ದರಿಂದ ಸೆಟ್ ಮಾಡುವ ಆಟವನ್ನು ಆಡಲು ಶುರು ಮಾಡಿದೆವು. ಹಣವನ್ನು ಇಟ್ಟು ಆಡುವ ಆಟವಲ್ಲ. ಸುಮ್ಮನೆ ಸಮಯ ಕಳೆಯುವುದಕ್ಕೆ ಒಂದೆರಡು ಆಟದಲ್ಲಿ ನಾನು ಗೆದ್ದೂ ಬಿಟ್ಟೆ. ಆಗ ಒಂದು ಪ್ರಸಂಗ ನಡೆಯಿತು.

 ಶ್ರುತಿಯ ಸಣ್ಣ ಮಗು, ಅವರು ಇರುವ ಬೆಡ್ ರೂಮಿನಲ್ಲಿ ಮಲಗಿತ್ತು. ಮಗುವನ್ನು ಮಲಗಿಸಿದ, ಶ್ರುತಿಯ ಗಂಡ ನಾಗರಾಜ್ ಅವರು ರೂಮಿನಿಂದ ಹೊರಗೆ ಬರುವಾಗ ಬಾಗಿಲು ಹಾಕಿಕೊಂಡು ಬಂದಿದ್ದರು.

ಸ್ವಲ್ಪಹೊತ್ತಿನಲ್ಲಿ ಅವರು ಏಕೋ ಮತ್ತೆ ಬೆಡ್ ರೂಮಿಗೆ ಹೋಗಲು ಬಾಗಿಲು ತೆರೆಯಬೇಕು ಎನ್ನುವಾಗ ಅದರ ಹಿಡಿಯು ಅವರ ಕೈಗೇ ಬಂದುಬಿಟ್ಟಿತು. ಪುನಹ ಜೋಡಿಸಿ ತಿರುಗಿಸಿದರೆ ತಿರುಗುವುದೇ ಇಲ್ಲ. ಅದು ಇಲ್ಲದೇ ಇದ್ದರೆ ಬಾಗಿಲು ತೆಗೆಯಲು ಆಗುವುದೇ ಇಲ್ಲ.  ಒಳಗೆ ಮಗು ಒಂದೆ. ಮಲಗಿದೆ. ಸುದ್ಧಿ ತಿಳಿದು ಕೆಲವರು ಪ್ರಯತ್ನಿಸಿದರೂ ಬಾಗಿಲು ತೆರೆಯಲು ಆಗಲಿಲ್ಲ. ಎಲ್ಲರಿಗೂ ಗಾಬರಿ. ಏನುಮಾಡುವುದು? ಮಗು ಎದ್ದು ಅತ್ತರೆ?.

……..ಮುಂದುವರಿಯುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ